‘ಎರಡು ವರ್ಷದ ಅನುಭವ ತಳಮಟ್ಟದ ವಾಸ್ತವಗಳನ್ನು ಅರಿಯಲು ಅವಕಾಶ ನೀಡಿತು. ಸತ್ಯಾಂಶ ಏನೆಂದು ಖುದ್ದಾಗಿ ನೋಡುವ ಅವಕಾಶ ಕಲ್ಪಿಸಿತು. ಐಎಎಸ್ ಅಧಿಕಾರಿಯಾಗಿದ್ದರೆ ನೇರವಾಗಿ ಬಡವರ ಪರ ಕೆಲಸ ಮಾಡುವ ಅವಕಾಶ ಇರುತ್ತಿತ್ತು, ವಿದೇಶಾಂಗ ಸೇವೆಗೆ ಹೋಗುವುದರಿಂದ ಈಗ ಅದು ಸಾಧ್ಯವಾಗದಿರಬಹುದು. ಆದರೆ, ದೇಶದ ಬಡ ಜನರ ಪರವಾಗಿ ಕೆಲಸ ಮಾಡುವ ತುಡಿತ ಮಾತ್ರ ಇದ್ದೇ ಇರುತ್ತದೆ. ನಿವೃತ್ತಿಯ ನಂತರವಾದರೂ ಅವರ ಸೇವೆ ಮಾಡುತ್ತೇನೆ’ ಎಂದು ಅವರು ಹೇಳುತ್ತಾರೆ.