‘ಸಂಸ್ಥೆಯಲ್ಲಿ 3,000 ರೋಗಿಗಳಿಗೆ ಮಂಡಿ ಕೀಲುಜೋಡಣೆ ಶಸ್ತ್ರಚಿಕಿತ್ಸೆ ಮಾಡಲಾಗಿದೆ. ಮಂಡಿ ಸವೆತದಿಂದ ತೊಂದರೆ ಅನುಭವಿಸುತ್ತಿರುವ ರೋಗಿಗಳಿಗೆ ನೆರವಾಗುವ ಉದ್ದೇಶದಿಂದ ಉಚಿತ ಶಸ್ತ್ರಚಿಕಿತ್ಸಾ ಶಿಬಿರ ಹಮ್ಮಿಕೊಂಡಿದ್ದೇವೆ. ಇದಕ್ಕಾಗಿ ರಾಜ್ಯಸಭಾ ಸದಸ್ಯ ಕುಪೇಂದ್ರ ರೆಡ್ಡಿ ₹10 ಲಕ್ಷ, ವಿಧಾನ ಪರಿಷತ್ ಸದಸ್ಯ ಶರವಣ ₹5 ಲಕ್ಷ, ಸಂಸ್ಥೆಯೊಂದು ₹3 ಲಕ್ಷ ಹಾಗೂ ಸಾರ್ವಜನಿಕರು ₹50,000 ನೀಡಿದ್ದಾರೆ’ ಎಂದರು.