‘ಗ್ರಾಹಕರು ದೂರು ಸಲ್ಲಿಸಿದ ಆರು ಗಂಟೆಯೊಳಗೆ ಸಮಸ್ಯೆ ಪರಿಹಾರವಾಗಬೇಕು. ದೂರನ್ನೇ ಸ್ವೀಕರಿಸುತ್ತಿಲ್ಲ ಎಂಬ ಗಂಭೀರ ಆಪಾದನೆ ಇದೆ. ಯಾರ್ಯಾರು ಎಷ್ಟೆಷ್ಟು ದೂರು ಸ್ವೀಕರಿಸಿದ್ದೀರಿ ಎಂಬ ಮಾಹಿತಿ ಕೊಡಿ. ಕರೆ ಸ್ವೀಕರಿಸುತ್ತೀರೊ, ಇಲ್ಲವೋ ಎಂಬುದನ್ನು ಪರಿಶೀಲಿಸಲು ನಾನೇ ಕರೆಮಾಡುತ್ತೇನೆ. ಯಾವ ಅಧಿಕಾರಿ, ಸಿಬ್ಬಂದಿ ಕರೆ ಸ್ವೀಕರಿಸುವುದಿಲ್ಲವೋ ಅಂತಹವರನ್ನು ಕೂಡಲೇ ಅಮಾನತು ಮಾಡುತ್ತೇನೆ’ ಎಂದು ಗದರಿದರು.