‘ಕುರಿ ಸಾಕಣಿಕೆಯಿಂದ ಬದುಕು ಸಾಗಿಸುತ್ತಿದ್ದ ಉಡಚಪ್ಪ ಈಗ ಅಕ್ಷರಶಃ ಬೀದಿಗೆ ಬಿದ್ದಿದ್ದಾನೆ. ಕುರಿಮರಿ ಕಳೆದುಕೊಂಡಿರುವ ಉಡಚಪ್ಪನಿಗೆ ಸರ್ಕಾರ ಸೂಕ್ತ ಪರಿಹಾರ ನೀಡಬೇಕು’ ಎಂದು ಗ್ರಾಮ ಪಂಚಾಯ್ತಿ ಸದಸ್ಯರಾದ ರಂಗಪ್ಪ ಪೂಜಾರ, ಚೆನ್ನಪ್ಪ ಸೊರಟೂರ, ಪರಸಪ್ಪ ಇಮ್ಮಡಿ, ಮಲ್ಲು ಕಳಸದ ಆಗ್ರಹಿಸಿದ್ದಾರೆ.
ಘಟನಾ ಸ್ಥಳಕ್ಕೆ ಉಪವಲಯ ಅರಣ್ಯ ಅಧಿಕಾರಿ ಎಸ್.ಎಲ್. ವಿಭೂತಿ ಭೇಟಿ ನೀಡಿ ಪರಿಶೀಲನೆ ನಡೆಸಿದರು.