ಭಾನುವಾರ ಆರಂಭವಾಗಲಿರುವ ಭಾರತ–ಪಾಕಿಸ್ತಾನ ಪಂದ್ಯದ ಕುರಿತು ಭಾರತ ತಂಡದ ಮಾಜಿ ಕ್ರಿಕೆಟಿಗ ವಿರೇಂದ್ರ ಸೆಹ್ವಾಗ್, ‘ಟೀವಿಯ ಬದಲಿಗೆ ರೇಡಿಯೋಗಳನ್ನು ಕೊಂಡುಕೊಳ್ಳಿ. ಪಾಕಿಸ್ತಾನ ಪಂದ್ಯ ಸೋತ ಬಳಿಕ ಅವುಗಳನ್ನು ಒಡೆದು ಹಾಕಿದರೂ ಅವು ನಿಮ್ಮ ಜೇಬಿಗೆ ಹೊರೆಯಾಗುವುದಿಲ್ಲ’ ಎಂದು ಪಾಕಿಸ್ತಾನ ತಂಡ ಹಾಗೂ ಅಭಿಮಾನಿಗಳನ್ನು ಕಿಚಾಯಿಸಿದ್ದರು. ಈ ಮೂಲಕ ಪಾಕಿಸ್ತಾನಕ್ಕೆ ಭಾರತವನ್ನು ಸೋಲಿಸಲು ಸಾಧ್ಯವಿಲ್ಲ ಎಂಬುದನ್ನು ಪರೋಕ್ಷವಾಗಿ ಹೇಳಿದ್ದರು.