ಮಧ್ಯಾಹ್ನ 1.30ಕ್ಕೆ ಬಾರ್ಜ್ ಅಪಘಾತಕ್ಕೀಡಾಗಿದೆ. ಸಂಜೆ 6.30ರ ಸುಮಾರಿಗೆ ಕಾವಲುಪಡೆ ಹಡಗು ಮತ್ತು ದೋಣಿಗಳು ಸ್ಥಳಕ್ಕೆ ಬಂದಿವೆ. ಆದರೆ, ಬಾರ್ಜ್ ಇರುವ ಪ್ರದೇಶದಲ್ಲಿ ಕಲ್ಲುಗಳಿರುವ ಕಾರಣ ಹಡಗನ್ನು ಬಳಸಲಾಗಲಿಲ್ಲ. ತುರ್ತು ಸಮಯದ ಬಳಕೆಗಾಗಿ ಇರಿಸಿಕೊಂಡಿದ್ದ ಸಣ್ಣ ದೋಣಿ ಮೂಲಕ ರಕ್ಷಣಾ ಕಾರ್ಯಾಚರಣೆ ಆರಂಭಿಸಲಾಗಿದೆ. ಮೊದಲ ಹಂತದಲ್ಲಿ ನಾಲ್ಕು ಜನರನ್ನು ರಕ್ಷಿಸಲಾಗಿದೆ. ನಂತರ ಸಮುದ್ರದಲ್ಲಿ ಅಲೆಗಳ ಅಬ್ಬರ ಜಾಸ್ತಿಯಾಗಿದ್ದು, ಕಾರ್ಯಾಚರಣೆ ಮುಂದುವರಿಸಲು ತೊಡಕಾಗಿದೆ.