ಮಂಗಳೂರು: ಉಳ್ಳಾಲದ ಅಳಿವೆಯಲ್ಲಿ ಅಪಘಾತಕ್ಕೀಡಾಗಿರುವ ಬೃಹತ್ ಬಾರ್ಜ್ನಲ್ಲಿ ಸಿಲುಕಿದ್ದ ಎಲ್ಲರನ್ನೂ ರಕ್ಷಿಸಲಾಗಿದೆ. ಶನಿವಾರ ಸಂಜೆ ಬಾರ್ಜ್ ಅಪಘಾತಕ್ಕೀಡಾಗಿತ್ತು. ಶನಿವಾರ ಕಾರ್ಯಾಚರಣೆ ನಡೆಸಿದ್ದ ರಕ್ಷಣಾ ತಂಡ ಅಪಾಯಕ್ಕೆ ಸಿಲುಕಿರುವ ಅದರಲ್ಲಿದ್ದ 27 ಮಂದಿ ಪೈಕಿ 4 ಮಂದಿಯನ್ನು ರಕ್ಷಿಸಿದ್ದರು.
ಉಳಿದ 23 ಮಂದಿಯನ್ನು ರಕ್ಷಿಸಲು ಸಾಧ್ಯವಾಗಿರಲಿಲ್ಲ. ಭಾನುವಾರ ಬೆಳಿಗ್ಗೆ ಮತ್ತೆ ಕಾರ್ಯಾಚರಣೆ ಆರಂಭಿಸಲಾಗಿತ್ತು.ಆದರೆ, ಭಾರೀ ಗಾಳಿ ಮತ್ತು ಮಳೆಯಿಂದಾಗಿ ರಕ್ಷಣಾ ಕಾರ್ಯಾಚರಣೆಯನ್ನು ತಾತ್ಕಾಲಿಕವಾಗಿ ಸ್ಥಳಿತಗೊಳಿಸಲಾಗಿತ್ತು. ಭಾರೀ ಗಾಳಿ, ಮಳೆಯ ನಡುವೆಯೇ ಕಾರ್ಯಾಚರಣೆ ನಡೆಸಿದ ರಕ್ಷಣಾ ತಂಡದ ಸಿಬ್ಬಂದಿ ಬಾರ್ಜ್ನಲ್ಲಿ ಸಿಲುಕಿದ್ದ 23 ಮಂದಿಯನ್ನು ರಕ್ಷಿಸಿದ್ದಾರೆ.