ಬೆಂಗಳೂರು: ಬಿಜೆಪಿ ಕೆ.ಆರ್.ಪುರ ಕ್ಷೇತ್ರ ಘಟಕದ ಯುವ ಮೋರ್ಚಾ ಕಾರ್ಯಕರ್ತರು ವಿಶ್ವ ಪರಿಸರ ದಿನದ ಪ್ರಯುಕ್ತ ಹೊರಮಾವು ಅಗರ ಕೆರೆಯಿಂದ ಕೆ.ಆರ್.ಪುರದ ವೆಂಗಯ್ಯನಕೆರೆಯವರೆಗೂ ಸೈಕಲ್ ಜಾಥಾ ನಡೆಸಿದರು.
ಮುಖಂಡ ನಂದೀಶ್ ರೆಡ್ಡಿ ಮಾತನಾಡಿ, ‘ವಾಹನಗಳಿಂದ ಪರಿಸರ ಹಾಳಾಗಿದೆ. ಇದಕ್ಕೆ ಪರ್ಯಾಯವಾಗಿ ಸೈಕಲ್ ಬಳಸುವ ಮೂಲಕ ಮಾಲಿನ್ಯ ನಿಯಂತ್ರಣ ಮಾಡಬೇಕು. ಪರಿಸರ ರಕ್ಷಣೆಗೆ ಪ್ರತಿಯೊಬ್ಬರೂ ಮುಂದಾಗಬೇಕು’ ಎಂದರು.
ಕಾರ್ಯಕ್ರಮದಲ್ಲಿ ಸಾರ್ವಜನಿಕರಿಗೆ ಗಿಡಗಳನ್ನು ವಿತರಿಸಲಾಯಿತು.