ಬೆಂಗಳೂರು: ಸುದ್ದಿವಾಹಿನಿಯೊಂದರ ಪ್ಯಾನಲ್ ಚರ್ಚೆಯಲ್ಲಿ "ಜಾನುವಾರುಗಳ ಮಾರಾಟ" (ಗೋ ಹತ್ಯೆ ನಿಷೇಧ ಎಂದೇ ವಿಶ್ಲೇಷಿಸಲ್ಪಡುತ್ತಿರುವ) ಕುರಿತ ಕೇಂದ್ರ ಸರಕಾರದ ಸುತ್ತೋಲೆ ಬಗ್ಗೆ ಬಿಜೆಪಿಯ ಡಾ. ವಾಮನಾಚಾರ್ಯ ರವರು ವ್ಯಕ್ತ ಪಡಿಸಿರುವ ಭಾವನೆಗಳಿಗೆ ಬಿಜೆಪಿ ಪಕ್ಷಕ್ಕೂ ಯಾವುದೇ ಸಂಬಂಧವಿಲ್ಲವೆಂದು ಬಿಜೆಪಿಯ ಹಿರಿಯ ನಾಯಕರಾದ ಎಸ್. ಸುರೇಶ್ ಕುಮಾರ್ ಸ್ಪಷ್ಟಪಡಿಸಿದ್ದಾರೆ.