ಜೈಲಿನಲ್ಲಿ ರಾಜಕೀಯ ಆಟ: ನಟ ರಜನೀಕಾಂತ್ ರಾಜಕೀಯ ಪ್ರವೇಶ, ಚುನಾವಣಾ ಆಯೋಗದ ಅಧಿಕಾರಿಗೆ ಲಂಚದ ಆಮಿಷ ಒಡ್ಡಿದ ಪ್ರಕರಣ, ಮುಂದೆ ಎದುರಾಗಲಿರುವ ಉಪಚುನಾವಣೆ, ತಮ್ಮ ಎದುರಾಳಿ ಪನ್ನೀರ್ ಸೆಲ್ವಂ ಮತ್ತು ಮುಖ್ಯಮಂತ್ರಿ ಪಳನಿಸ್ವಾಮಿ ಬಳಗದ ನಡುವಿನ ‘ರಾಜಕೀಯ ವ್ಯವಹಾರ’ದ ವಿಚಾರವಾಗಿ ದಿನಕರನ್ ಹಾಗೂ ಶಶಿಕಲಾ ಸುದೀರ್ಘ ಚರ್ಚೆ ನಡೆಸಿದರು ಎಂದು ತಿಳಿದು ಬಂದಿದೆ.