ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಾಗಲಕೋಟೆ ತಾಲ್ಲೂಕು ಬೇವೂರು: ಸಮೃದ್ಧ ಮಳೆಗಾಗಿ ಪ್ರಾರ್ಥಿಸಿ ಗೊಂಬೆಗಳ ಮದುವೆ

Last Updated 5 ಜೂನ್ 2017, 15:43 IST
ಅಕ್ಷರ ಗಾತ್ರ

ಬಾಗಲಕೋಟೆ: ಸಮೃದ್ಧ ಮಳೆಗಾಗಿ ಪ್ರಾರ್ಥಿಸಿ ಬಾಗಲಕೋಟೆ ತಾಲ್ಲೂಕು ಬೇವೂರಿನಲ್ಲಿ ಸೋಮವಾರ ಗ್ರಾಮಸ್ಥರು ಗೊಂಬೆಗಳ ಮದುವೆ ನೆರವೇರಿಸಿದರು.

ಗ್ರಾಮದ ರೇವಣಸಿದ್ದಪ್ಪ ಕುರಿ ಅವರ ನಿವಾಸ ಮದುವೆ ಮನೆಯಾಗಿ ಬದಲಾಗಿತ್ತು. ವರನಾಗಿದ್ದ ಬೊಂಬೆಗೆ ಬಟ್ಟೆ ತೊಡಿಸಿ, ಟವೆಲ್‌ ಹಾಕಿ, ತಲೆ ಮೇಲೆ ಟೊಪಿಯನ್ನು ಹಾಕಲಾಗಿತ್ತು. ವಧುವಿನ ಬೊಂಬೆಗೆ ಸೀರೆಯುಡಿಸಿ, ಹಸಿರು ಬಳೆ ತೊಡಿಸಿ ಸಿಂಗರಿಸಲಾಗಿತ್ತು.

ಸಾಂಪ್ರದಾಯಿಕವಾಗಿ ಮದುವೆ ಶಾಸ್ತ್ರಗಳನ್ನು ನೆರವೇರಿಸಲಾಯಿತು. ನೆರೆದಿದ್ದವರು ಮಳೆಗಾಗಿ ಪ್ರಾರ್ಥಿಸಿದರು.

ಮದುವೆ ಕಾರ್ಯಕ್ಕೆ ಬಂದವರಿಗೆ ಊಟದ ವ್ಯವಸ್ಥೆಯನ್ನೂ ಮಾಡಲಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT