ನವದೆಹಲಿ: ಭಾರತೀಯ ರಿಸರ್ವ್ ಬ್ಯಾಂಕ್ (ಆರ್ಬಿಐ) ಗವರ್ನರ್ ಉರ್ಜಿತ್ ಪಟೇಲ್ ನೇತೃತ್ವದ ಆರು ಸದಸ್ಯರ ಹಣಕಾಸು ನೀತಿ ಸಮಿತಿ (ಎಂಪಿಸಿ) ಮಂಗಳವಾರ ಸಭೆ ಸೇರಲಿದೆ.
ಹಣದುಬ್ಬರ ನಿಯಂತ್ರಣದಲ್ಲಿರುವುದರಿಂದ ಬಡ್ಡಿದರ ಕಡಿತಕ್ಕೆ ಹಣಕಾಸು ಸಚಿವ ಅರುಣ್ ಜೇಟ್ಲಿ ಅವರು ಒಲವು ತೋರಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಆದರೆ, ಜಿಎಸ್ಟಿ ಪರಿಣಾಮಗಳ ನ್ನು ಎದುರು ನೋಡುತ್ತಿರುವ ಆರ್ಬಿಐ ಬಡ್ಡಿದರದಲ್ಲಿ ಯಥಾಸ್ಥಿತಿ ಕಾಪಾಡಿಕೊಳ್ಳುವ ಸಾಧ್ಯತೆ ಇದೆ ಎಂದು ಹಣಕಾಸು ತಜ್ಞರು ವಿಶ್ಲೇಷಿಸಿದ್ದಾರೆ.
ನಿಯಂತ್ರಣದಲ್ಲಿರುವ ಹಣದುಬ್ಬರ ಮತ್ತು ತೈಲ ಬೆಲೆಗಳು ಹಾಗೂ ಉತ್ತಮ ಮುಂಗಾರು ಮುನ್ಸೂಚನೆಯಿಂದಾಗಿ ಬಡ್ಡಿದರ ಕಡಿತ ಎದುರು ನೋಡುತ್ತಿರುವುದಾಗಿ ಜೇಟ್ಲಿ ಸುದ್ದಿವಾಹಿನಿಯೊಂದಕ್ಕೆ ನೀಡಿದ ಸಂದರ್ಶನದಲ್ಲಿ ಹೇಳಿದ್ದಾರೆ.
ಖಾಸಗಿ ರಂಗ, ಕೈಗಾರಿಕಾ ವಲಯಗಳು ಕೂಡ ಬಡ್ಡಿದರ ಕಡಿತದ ಬಗ್ಗೆ ಆಶಾಭಾವನೆ ಹೊಂದಿವೆ.