ಶ್ರೀನಗರ: ಕೇಂದ್ರೀಯ ಮೀಸಲು ಪೊಲೀಸ್ ಪಡೆಯ (ಸಿಆರ್ಪಿಎಫ್) ಶಿಬಿರಕ್ಕೆ ನುಗ್ಗಿ ದೀರ್ಘ ಕಾಲ ಅಲ್ಲಿದ್ದು ಭಾರಿ ಅನಾಹುತ ಉಂಟು ಮಾಡುವ ಉದ್ದೇಶ ಹೊಂದಿದ್ದ ನಾಲ್ವರು ಉಗ್ರರನ್ನು ಸೋಮವಾರ ಬೆಳಿಗ್ಗೆ ಬಂಡಿಪೊರಾ ಜಿಲ್ಲೆಯ ಸುಂಬಲ್ದಲ್ಲಿ ಹತ್ಯೆ ಮಾಡಲಾಗಿದೆ. ಶಿಬಿರದೊಳಗೆ ಸಾಕಷ್ಟು ಹಾನಿ ಮಾಡಿ ನಂತರ ತಮ್ಮನ್ನು ಸ್ಫೋಟಿಸಿಕೊಳ್ಳುವ ಸಂಚನ್ನು ಉಗ್ರರು ಹೊಂದಿದ್ದರು.