ಪ್ರಮುಖ ರಸ್ತೆಯಲ್ಲಿನ ಈ ಅವ್ಯವಸ್ಥೆಯಿಂದಾಗಿ ಹಳೇನಗರ, ಹೊಸಮನೆ ಪ್ರದೇಶಗಳಲ್ಲಿ ಕೆಲವು ಕಡೆ ನೀರಿನ ಸಮಸ್ಯೆ ಸಹ ಎದುರಾಗಿದೆ. ‘ರಂಗಪ್ಪ ವೃತ್ತದ ರಸ್ತೆಯ ಮಧ್ಯ ಭಾಗದಲ್ಲಿನ ಪೈಪ್ ಬದಲಿಸಿ ಉತ್ತಮ ರಸ್ತೆ ನಿರ್ಮಿಸಿದರೆ ಯಾವುದೇ ಸಮಸ್ಯೆ ಇರುವುದಿಲ್ಲ. ಇದರ ಕುರಿತು ಅಧಿಕಾರಿ ಗಳ ಗಮನಕ್ಕೆ ವಿಷಯ ತಂದರೂ ಯಾವುದೇ ಪ್ರಯೋಜನವಾಗಿಲ್ಲ’ ಎನ್ನುತ್ತಾರೆ ಸದಸ್ಯ ಟಿಪ್ಪುಸುಲ್ತಾನ್.