ಪಟ್ಟಣದ ಮೈಸೂರು ರಸ್ತೆಯಲ್ಲಿರುವ ಖಾಸಗಿ ಆಸ್ಪತ್ರೆ ಎದುರು ಕಾರನ್ನು ನಿಲ್ಲಿಸಿದ ಶಿವರಾಜು ಮತ್ತವರ ಕುಟುಂಬದವರು ಆಸ್ಪತ್ರೆಗೆ ದಾಖಲಾಗಿದ್ದ ತಂದೆಯ ಆರೋಗ್ಯ ವಿಚಾರಿಸಲು ತೆರಳುತ್ತಿದ್ದರು. ಅಷ್ಟರಲ್ಲಿ ಸ್ಥಳಕ್ಕೆ ಧಾವಿಸಿದ ಸಂಚಾರಠಾಣೆಯ ಪೊಲೀಸರು, ರಸ್ತೆ ಪಕ್ಕದಲ್ಲಿ ನಿಲ್ಲಿಸಿದ್ದ ಕಾರಿನ ಚಾಲಕನನ್ನು ಕರೆದು ದಾಖಲೆ ಕೇಳಿದರು. ದಾಖಲೆ ತಂದು ತೋರಿಸುವಷ್ಟರಲ್ಲಿ ಮಾತಿನ ಚಕಮಕಿ ನಡೆದು ಸಂಚಾರ ಠಾಣೆಯ ವಾಹನದ ಚಾಲಕ, ಕಾರಿನ ಚಾಲಕ ಶಿವರಾಜು ಅವರನ್ನು ಥಳಿಸಿದರು ಎಂದು ಕುಟುಂದದವರು ಆಕ್ರೋಶ ವ್ಯಕ್ತಪಡಿಸಿದರು. ಸಂಚಾರ ಠಾಣೆಯ ವಾಹನವನ್ನು ಅಡ್ಡಗಟ್ಟಿ ಪ್ರತಿಭಟನೆ ನಡೆಸಿದರು.