ರಂಜಾನ್ ಮಾಸದಲ್ಲಿ ಉಪವಾಸ ಆಚರಿಸುವ ಧರ್ಮನಿಷ್ಠ ಅಹ್ಮದ್ ಅವರು ದಾಳಿಯ ಬಗ್ಗೆ ಮಾಹಿತಿ ಸಿಕ್ಕ ತಕ್ಷಣ ಶಿಬಿರದತ್ತ ಧಾವಿಸಿದ್ದು ಮಾತ್ರವಲ್ಲದೇ, ನಾಲ್ವರು ಭಯೋತ್ಪಾದಕರನ್ನು ಹತ್ಯೆ ಮಾಡಿ ಆ ಪ್ರದೇಶವನ್ನು ಸಂಪೂರ್ಣವಾಗಿ ತೆರವುಗೊಳಿಸುವರೆಗೂ ಅಲ್ಲೇ ಇದ್ದರು.
‘ಭದ್ರತಾ ಪಡೆಗಳಿಗೆ ಕ್ಷಿಪ್ರವಾಗಿ ಪ್ರತಿಕ್ರಿಯೆ ನೀಡಲು ಮತ್ತು ಆ ಪ್ರದೇಶದಲ್ಲಿ ತ್ವರಿತವಾಗಿ ಜಮಾವಣೆಗೊಳ್ಳಲು ಸಾಧ್ಯವಾಗಿದ್ದರಿಂದ ಉಗ್ರರ ಯತ್ನ ವಿಫಲಗೊಳಿಸಿ ಹಲವರ ಜೀವ ಉಳಿಸಲು ಸಾಧ್ಯವಾಯಿತು’ ಎಂದು ಅಧಿಕಾರಿಯೊಬ್ಬರು ಹೇಳಿದ್ದಾರೆ.