‘ಬೆಂಗಳೂರು ಗೃಹ ನಿರ್ಮಾಣ ಸಹಕಾರ ಸಂಘಕ್ಕೆ ಬಡಾವಣೆ ನಿರ್ಮಿಸಿ, ಹಸ್ತಾಂತರಿಸಲು ವಾಜರಹಳ್ಳಿ ಮತ್ತು ರಘುವನಹಳ್ಳಿಯಲ್ಲಿ ಕೃಷ್ಣಪ್ಪ ಪಾಲುದಾರಿಕೆಯ ಕಂಪೆನಿ ರೈತರಿಂದ ಭೂಸ್ವಾಧೀನ ಪಡಿಸಿಕೊಂಡಿತ್ತು. ಈ ಜಮೀನುಗಳ ಪರಿಹಾರ ಮೊತ್ತವನ್ನು ತನ್ನ ಹೆಸರಿಗೆ ಪಡೆದ ಕಂಪೆನಿ ರೈತರಿಗೆ ವಂಚಿಸಿದೆ ಎಂಬ ಗಂಭೀರ ಆರೋಪ ಸಚಿವರ ಮೇಲೆ ಇದೆ. ಈ ರೀತಿಯ ಕಳಂಕ ಹೊತ್ತಿರುವ ಕೃಷ್ಣಪ್ಪ ಅವರನ್ನು ಸಚಿವ ಸ್ಥಾನದಲ್ಲಿ ಮುಂದುವರಿಸುವುದು ಎಷ್ಟು ಸರಿ’ ಎಂದು ರಾಜ್ಯಪಾಲ ವಜುಭಾಯಿ ವಾಲಾ ಅವರು ಮುಖ್ಯಮಂತ್ರಿಗೆ ಪತ್ರ ಬರೆದಿದ್ದರು.