‘ಸಿನಿಮಾದಲ್ಲಿ ಕೇವಲ ಪ್ರೀತಿಯಷ್ಟೇ ಇದ್ದರೆ ಪ್ರೇಕ್ಷಕರು ಇಷ್ಟಪಡುವುದಿಲ್ಲ. ಬರೀ ಸಸ್ಪೆನ್ಸ್ ಇಟ್ಟುಕೊಂಡೂ ಸಿನಿಮಾ ಯಶಸ್ಸು ಕಾಣುವುದು ಕಷ್ಟ. ಈ ಎರಡೂ ಬೆರೆತಿದ್ದರೆ ಜನರಿಗೆ ಸಿನಿಮಾ ಇಷ್ಟವಾಗುತ್ತದೆ. ನಮ್ಮ ಸಿನಿಮಾದಲ್ಲಿ ಪ್ರೀತಿ ಮತ್ತು ಸಸ್ಪೆನ್ಸ್ ಹದವಾಗಿ ಬೆರೆತಿದೆ’ ಎಂದರು ಅದಿತಿ. ನಿರ್ದೇಶಕ ಶಿವತೇಜಸ್ ಚಿತ್ರವನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದ ಉತ್ಸಾಹದಲ್ಲಿದ್ದರು.