‘ವಿಶ್ವ ಪರಿಸರ ದಿನಾಚರಣೆಯಂದು ಶಾಲೆಯ ವಿದ್ಯಾರ್ಥಿಯೊಬ್ಬನಿಗೆ ಮಾವಿನ ಗಿಡ ಕೊಟ್ಟರು. ಫ್ಲ್ಯಾಟ್ನಲ್ಲಿರುವ ಆತ ಅದನ್ನು ಸ್ವೀಕರಿಸಲು ನಿರಾಕರಿಸಿದ. ಫ್ಲ್ಯಾಟ್ ಸಮೀಪದಲ್ಲೇ ಎಲ್ಲಾದರೂ ನೆಡುವಂತೆ ನಾನು ಸಲಹೆ ನೀಡಿದ್ದೆ. ಮೂರು ತಿಂಗಳು ಜತನವಾಗಿ ಬೆಳೆಸಿದ್ದ ಆ ಗಿಡವನ್ನು ರಸ್ತೆ ವಿಸ್ತರಣೆ ಸಲುವಾಗಿ ಕಡಿದರು. ಆಗ ಸಿಟ್ಟಿನಿಂದ ನನಗೆ ಕರೆ ಮಾಡಿದ ವಿದ್ಯಾರ್ಥಿ, ಈ ಮಾತನ್ನು ಹೇಳಿದ್ದ’ ಎಂದು ಅವರು ಮೆಲುಕು ಹಾಕಿದರು.