ಕರಣ್ ಸೈನಿ ಎಂಬುವವರು ಸುಷ್ಮಾ ಅವರನ್ನು ಉದ್ದೇಶಿಸಿ, ‘ಸುಷ್ಮಾ ಸ್ವರಾಜ್ ಅವರೇ, ನಾನು ಮಂಗಳ ಗ್ರಹದಲ್ಲಿ ಸಿಕ್ಕಿಹಾಕಿಕೊಂಡಿದ್ದೇನೆ. ಮಂಗಳಯಾನದ (987 ದಿನಗಳ ಹಿಂದೆ) ಮೂಲಕ ಕಳುಹಿಸಿದ ಆಹಾರ ಖಾಲಿಯಾಗಿದೆ. ಮಂಗಳಯಾನ–2 ಅನ್ನು ಯಾವಾಗ ಕಳುಹಿಸುತ್ತೀರಿ?’ ಎಂದು ಗುರುವಾರ ಟ್ವೀಟ್ ಮಾಡಿದ್ದರು. ಈ ಸಂದೇಶಕ್ಕೆ ಇಸ್ರೊದ ಹೆಸರನ್ನೂ ಜೋಡಿಸಿದ್ದರು.