ಶವ ಸಂಸ್ಕಾರಕ್ಕೆ ಅಗತ್ಯ ಸ್ಥಳವಕಾಶ ಕಲ್ಪಿಸಲು ಸ್ಥಳೀಯ ಆಡಳಿತ ನಿರ್ಲಕ್ಷ್ಯ ಧೋರಣೆ ತಾಳಿದೆ. ಗ್ರಾಮೀಣ ಪ್ರದೇಶಗಳಲ್ಲಿ ಮಾತ್ರವಲ್ಲ ನಗರದಲ್ಲೂ ಕೂಡ ರುದ್ರಭೂಮಿಗಳ ಕೊರತೆ ಅಪಾರವಾಗಿದೆ. ಶವ ಹೂತಿರುವ ಸ್ಥಳದಲ್ಲೆ ಪುನಾ ಇನ್ನೊಂದು ಶವ ಅಂತ್ಯ ಸಂಸ್ಕಾರ ನಡೆಸುವಂತಹ ಶೋಚನೀಯ ಪರಿಸ್ಥಿತಿಯಿದೆ. ಆದರೂ, ಸ್ಥಳೀಯ ಆಡಳಿತಗಳಾಗಲಿ ಅಥವಾ ಜಿಲ್ಲಾಡಳಿತವಾಗಲಿ ಜಿಲ್ಲೆಯಲ್ಲಿನ ರುದ್ರಭೂಮಿಯ ಸಮಸ್ಯೆ ನೀಗಿಸುವ ಕನಿಷ್ಠ ಪ್ರಯತ್ನವೂ ಮಾಡಿಲ್ಲ ಎಂದು ಜನರು ಆರೋಪಿಸುತ್ತಿದ್ದಾರೆ.