ಕವಿ ಎಚ್.ಎಸ್. ವೆಂಕಟೇಶಮೂರ್ತಿ ಮಾತನಾಡಿ, ‘ಗಾಂಧೀಜಿ ದೇಶಕ್ಕೆ ರಾಷ್ಟ್ರಪಿತ ಎನಿಸಿಕೊಂಡರೂ, ಅವರ ವೈಯಕ್ತಿಕ ಜೀವನದಲ್ಲಿ ಹಲವು ಬಿಕ್ಕಟ್ಟುಗಳಿದ್ದವು. ಅವರು ಪುರುಷ ಅಹಂಕಾರಕ್ಕೆ ಒಳಗಾಗಿ ಕಸ್ತೂರ ಬಾ ಅವರಿಗೆ ಗೌರವ ನೀಡುತ್ತಿರಲಿಲ್ಲ. ಮಗನಿಗೆ ಸ್ವತಂತ್ರವಾಗಿ ಜೀವಿಸಲು ಬಿಟ್ಟಿರಲಿಲ್ಲ ಎಂಬ ಅಂಶ ಇತ್ತೀಚೆಗೆ ಪ್ರಕಟಗೊಂಡ ಕೃತಿಗಳಲ್ಲಿ ಉಲ್ಲೇಖಗೊಂಡಿದೆ’ ಎಂದರು.