ಬುಧವಾರ ಬೆಳಿಗ್ಗೆ ದಾಬಸ್ಪೇಟೆಯ ‘ಪ್ರಿನ್ಸ್ ಕ್ಲಾತ್ ಶೋರೂಂ’ಗೆ ಹೋಗಿದ್ದ ಜಯಮ್ಮ, ಬಟ್ಟೆ ಖರೀದಿಸಿ ₹ 2,000 ಮುಖಬೆಲೆಯ ನೋಟು ಕೊಟ್ಟಿದ್ದರು. ಅದನ್ನು ಯಂತ್ರದ ಮೂಲಕ ಪರಿಶೀಲಿಸಿದ ಅಂಗಡಿ ಮಾಲೀಕ, ‘ಇದು ನಕಲಿ ನೋಟು’ ಎಂದಿದ್ದರು. ಆ ಕೂಡಲೇ ಜಯಮ್ಮ ತರಾತುರಿಯಲ್ಲಿ ಹೊರಬಂದು, ಗೋವಿಂದರಾಜು ಆಟೊದಲ್ಲಿ ಪರಾರಿಯಾಗಿದ್ದರು.