ಆಂಧ್ರಪ್ರದೇಶದ ಕಿಶೋರ್, ಎಂಜಿನಿಯರಿಂಗ್ ಪದವಿ ಮುಗಿಸಿ ಆರು ತಿಂಗಳ ಹಿಂದಷ್ಟೇ ನಗರಕ್ಕೆ ಬಂದಿದ್ದರು. ಬಿಇಎಲ್ ರಸ್ತೆಯ ಪೇಯಿಂಗ್ ಗೆಸ್ಟ್ ಕಟ್ಟಡದಲ್ಲಿ ನೆಲೆಸಿದ್ದ ಅವರು, ಉದ್ಯೋಗ ಅರಸಿ ಹಲವು ಕಂಪೆನಿಗಳನ್ನು ಅಲೆದಿದ್ದರು. ಆದರೆ, ಕೆಲಸ ಸಿಕ್ಕಿರಲಿಲ್ಲ.
ಕಿಶೋರ್ ಸಂಬಂಧಿ ಶ್ರೀರಾಮಕಂಠ ಅವರು ಐಟಿಪಿಎಲ್ ಉದ್ಯೋಗಿಯಾಗಿದ್ದಾರೆ. ಬುಧವಾರ ಮಧ್ಯಾಹ್ನ ಸೀಮೆಎಣ್ಣೆ ತೆಗೆದುಕೊಂಡು ಜಕ್ಕೂರು ಸ್ಮಶಾನಕ್ಕೆ ತೆರಳಿರುವ ಕಿಶೋರ್, ಶ್ರೀರಾಮಕಂಠ ಅವರಿಗೆ ಆ ಲೊಕೇಷನ್ ಕಳುಹಿಸಿದ್ದಾರೆ. ಅಲ್ಲದೆ, ‘ಪ್ಲೀಸ್ ಕಲೆಕ್ಟ್ ಮೈ ಬಾಡಿ ಹಿಯರ್. ಬೈ ಬೈ’ ಎಂದು ಸಂದೇಶವನ್ನೂ ಕಳುಹಿಸಿದ್ದಾರೆ.