ಜತೆಗೆ ‘ನಾವು ಮುಖ್ಯಮಂತ್ರಿ ಹಾಗೂ ಜೈನ್ ವಿರುದ್ಧದ ಭ್ರಷ್ಟಾಚಾರ ಪ್ರಕರಣಗಳ ಕುರಿತು ಚರ್ಚಿಸಲು ಉದ್ದೇಶಿಸಿದ್ದೆವು. ಅದಕ್ಕಾಗಿ ರಾಮ್ಲೀಲಾ ಮೈದಾನದಲ್ಲಿ ವಿಶೇಷ ಅಧಿವೇಶನ ಕರೆಯುವಂತೆ ಬೇಡಿಕೆ ಸಲ್ಲಿಸಲು ಸಾರ್ವಜನಿಕ ಸಭೆಗೆ ಆಗಮಿಸಿದ್ದೆವು. ಆದರೆ ಪೊಲೀಸರು ಭ್ರಷ್ಟರನ್ನು ರಕ್ಷಿಸುತ್ತಿರುವ ಮುಖ್ಯಮಂತ್ರಿ ನಿವಾಸಕ್ಕೆ ರಕ್ಷಣೆ ನೀಡಿ, ನಮಗೆ ಅವಕಾಶ ನಿರಾಕರಿಸಿದ್ದಾರೆ’ ಎಂದು ಆರೋಪಿಸಿದ್ದಾರೆ.