ಮುಂಬೈ: ರಾಷ್ಟ್ರಪತಿ ಅಭ್ಯರ್ಥಿ ಸ್ಥಾನಕ್ಕೆ ಆರ್ಎಸ್ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಅವರನ್ನು ಆಯ್ಕೆ ಮಾಡಲು ಬೆಂಬಲಿಸುತ್ತಿರುವ ಶಿವಸೇನಾ, ರಾಷ್ಟ್ರಪತಿ ಭವನದಲ್ಲಿ ‘ಹಿಂದುತ್ವದ ರಬ್ಬರ್ ಸ್ಟಾಂಪ್’ ಅವಶ್ಯಕತೆ ಇದೆ ಎಂದು ಹೇಳಿದೆ.
ದೇಶವನ್ನು ‘ಹಿಂದೂ ರಾಷ್ಟ್ರ’ವಾಗಿಸುವ, ‘ರಾಮ ಮಂದಿರ’ ಹಾಗೂ ಸಂವಿಧಾನದ 370ನೇ ವಿಧಿಯ ವಿವಾದ ಇತ್ಯರ್ಥಗೊಳಿಸುವ ಸಾಮರ್ಥ್ಯ ಇರುವ ವ್ಯಕ್ತಿಯ ಅಗತ್ಯ ದೇಶಕ್ಕೆ ಇದೆ ಎಂದು ಶಿವಸೇನಾ ಶುಕ್ರವಾರ ಹೇಳಿದೆ.