‘ಬೆಂಗಳೂರಿನಲ್ಲಿ ವೈಮಾನಿಕ ತರಬೇತಿ ಕೇಂದ್ರ, ಮೈಸೂರಿನಲ್ಲಿ ಆಟೋಮೊಬೈಲ್, ಕಲಬುರ್ಗಿಯಲ್ಲಿ ಸಾಮಾನ್ಯ ಎಂಜಿನಿಯರಿಂಗ್ ಮತ್ತು ದಾಂಡೇಲಿಯಲ್ಲಿ ನವೀಕರಿಸಬಹುದಾದ ಇಂಧನ ತರಬೇತಿ ಕೇಂದ್ರಗಳು ಸ್ಥಾಪನೆಯಾಗಲಿವೆ. ಪ್ರತಿ ಕೇಂದ್ರಕ್ಕೆ ₹ 500 ಕೋಟಿ ವೆಚ್ಚ ಆಗಲಿದೆ.
ಒಟ್ಟು ₹ 2031.80 ಕೋಟಿ ಮೊತ್ತದ ಯೋಜನೆ ಇದಾಗಿದೆ. ರಾಜ್ಯ ಸರ್ಕಾರ ‘ಕೌಶಲ ಕರ್ನಾಟಕ’ ಯೋಜನೆಯಡಿ ಶೇ 10ರಷ್ಟು (₹ 219.32 ಕೋಟಿ) ಅನುದಾನ ನೀಡಲಿದ್ದು, ಸೀಮೆನ್ಸ್ ಕಂಪೆನಿ ಶೇ 90ರಷ್ಟು (₹ 18 22.48 ಕೋಟಿ) ಹಣಕಾಸು ಒದಗಿಸಲಿದೆ’ ಎಂದು ಸಿದ್ದರಾಮಯ್ಯ ವಿವರಿಸಿದರು.