ಇದರ ಅಭಿವೃದ್ಧಿಗೆ ಜನರಿಂದ ವಿರೋಧ ವ್ಯಕ್ತವಾಗುತ್ತಿದ್ದಂತೆ ರಾಜ್ಯ ಸರ್ಕಾರವು ಮುಜರಾಯಿ ಇಲಾಖೆಯಿಂದ ವರದಿ ಕೇಳಿತ್ತು. ಇದೀಗ ಇಲಾಖೆ ಕಲ್ಯಾಣಿಯ ನೀರು ಸಂಗ್ರಹ ಪ್ರದೇಶ ಮಾತ್ರವಲ್ಲದೆ, ವಾರ್ಷಿಕ ಆಚರಣೆಯಾದ ತೆಪ್ಪೋತ್ಸವ ನಡೆಸಲು ಅನುಕೂಲವಾಗುವ ವ್ಯವಸ್ಥೆ ಕಲ್ಪಿಸಲು ಮುಂದಾಗಿದೆ. ಹೆಚ್ಚುವರಿ ಜಿಲ್ಲಾಧಿಕಾರಿ ಪಿ.ಎಸ್.ಕಾಂತರಾಜು ಬುಧವಾರ ಸ್ಥಳ ಪರಿಶೀಲನೆ ನಡೆಸಿದರು.