ರಾಜ್ಯದ ವಿವಿಧ ಜಿಲ್ಲೆಗಳಿಂದ ಬಂದಿರುವ 16 ಕಲಾವಿದರು ಶಿಬಿರದಲ್ಲಿ ಭಾಗವಹಿಸಿದ್ದಾರೆ. ತೇಗ ಮತ್ತು ಶಿವ ಹೊನ್ನೆ ಮರಗಳ ದಿಮ್ಮಿಗಳಲ್ಲಿ ಬೇಲೂರು ಶಿಲ್ಪಕಲೆಯಲ್ಲಿನ ಶಾಂತಲಾ, ಶುಕ ಭಾಷಿಣಿ, ದರ್ಪಣ ಸುಂದರಿ ಸೇರಿದಂತೆ ಹಲವಾರು ಮದನಿಕೆಯರ ಕಲಾ ಕೃತಿ ಗಳನ್ನು ಅವರು ಹೊಯ್ಸಳ ಶೈಲಿಯಲ್ಲಿ ಕಟ್ಟಿಗೆಯ ತುಂಡುಗಳಲ್ಲಿ ಮೂಡಿ ಸುತ್ತಿದ್ದಾರೆ.