ಕೆಲವು ಗ್ರಾಮಗಳಲ್ಲಿ ಮಳೆ ಹದವಾಗಿ ಬಿದ್ದು ಪರಿಣಾಮ ಹೆಸರು, ಅಲಸಂದೆ ಸೇರಿದಂತೆ ವಿವಿಧ ಮುಂಗಾರು ಬೆಳೆಗಳನ್ನು ಬಿತ್ತನೆ ಮಾಡಿದ್ದರು. ಯಳನಡು, ಕೆಂಕೆರೆ, ಹಂದನಕೆರೆ, ತೊರೆಸೂರುಗೊಂಡನಹಳ್ಳಿ, ನಂದಿಹಳ್ಳಿ ಗ್ರಾಮಗಳಲ್ಲಿ ಹೆಸರು ಗಿಡಗಳು ಹುಲುಸಾಗಿ ಬೆಳೆದಿವೆ. ಆದರೆ ಗಿಡಗಳ ಮೊಗ್ಗುಗಳನ್ನು ಕೆಂಪು ಕಂಬಳಿಹುಳಗಳು ತಿನ್ನಲು ಆರಂಭಿಸಿವೆ. ಹೊಲದಿಂದ ಹೊಲಕ್ಕೆ ಪಸರಿಸುತ್ತಿವೆ. ರೈತರು ಹುಳುಗಳ ನಾಶ ಪಡಿಸಲು ಮುಂದಾಗಿದ್ದರೂ ಇವುಗಳ ಸಂಖ್ಯೆ ಹೆಚ್ಚುತ್ತಲೇ ಇದೆ. ಇದರಿಂದ ಕೈಗೆ ಬಂದ ತುತ್ತು ಬಾಯಿಗೆ ಬಾರದ ಸ್ಥಿತಿಯನ್ನು ರೈತರು ಅನುಭವಿಸುತ್ತಿದ್ದಾರೆ.