ನವದೆಹಲಿ: ಭಾರತ ತಂಡ ಶ್ರೀಲಂಕಾ ವಿರುದ್ಧದ ಪಂದ್ಯದಲ್ಲಿ ಸೋಲು ಅನುಭವಿಸಿದ ನಂತರ ತಮ್ಮನ್ನು ಗುರಿಯಾಗಿರಿಸಿ ವಿಡಿಯೋ ಮೂಲಕ ಗುಡುಗಿದ್ದ ಪಾಕಿಸ್ತಾನ ಮಾಜಿ ಕ್ರಿಕೆಟಿಗನ ವಿಡಿಯೊಗೆ ಪ್ರತಿಕ್ರಿಯಿಸಲು ವಿರೇಂದ್ರ ಸೆಹ್ವಾಗ್ ನಿರಾಕರಿಸಿದ್ದಾರೆ.
2017ರ ಚಾಂಪಿಯನ್ಸ್ ಟ್ರೋಫಿ ಪಂದ್ಯಾವಳಿಯ ತನ್ನ ಮೊದಲ ಪಂದ್ಯದಲ್ಲಿ ಪಾಕಿಸ್ತಾನ ತಂಡವನ್ನು ವಿರಾಟ್ ಕೋಹ್ಲಿ ನೇತೃತ್ವದ ಭಾರತ ತಂಡ 124ರನ್ ಅಂತರದಿಂದ ಮಣಿಸಿತ್ತು. ಹಾಗಾಗಿ ಭಾರತ ತಂಡದ ಮಾಜಿ ಆರಂಭಿಕ ಬ್ಯಾಟ್ಸ್ಮನ್ ಸೆಹ್ವಾಗ್ ಟ್ವಿಟರ್ ಮೂಲಕ ಭಾರತ ತಂಡವನ್ನು ಅಭಿನಂದಿಸಿದ್ದರು.