ಚೌಹಾಣ್ ಅವರು ಭೋಪಾಲದ ಬಿಎಚ್ಇಎಲ್ನ ದಸ್ಸೆರಾ ಮೈದಾನದಲ್ಲಿ ಶನಿವಾರ ಬೆಳಿಗ್ಗೆ 11 ಗಂಟೆಗೆ ಉಪವಾಸ ಆರಂಭಿಸಿದ್ದರು. ಈ ಮಧ್ಯೆ, ಮಂದಸೌರ್ನಲ್ಲಿ ಪೊಲೀಸರ ಗುಂಡೇಟಿಗೆ ಬಲಿಯಾದ ರೈತರ ಪೈಕಿ ನಾಲ್ವರ ಕುಟುಂಬದವರು ಮತ್ತು ಬೃಹತ್ ಸಂಖ್ಯೆಯ ರೈತರು ಮುಖ್ಯಮಂತ್ರಿಯನ್ನು ಭೇಟಿ ಮಾಡಿದ್ದಾರೆ. ಉಪವಾಸ ಅಂತ್ಯಗೊಳಿಸುವಂತೆ ಸಂತ್ರಸ್ತರ ಕುಟುಂಬದವರು ಮುಖ್ಯಮಂತ್ರಿ ಬಳಿ ಮನವಿ ಮಾಡಿದ್ದರು ಎನ್ನಲಾಗಿದೆ.