ನಿತ್ಯ ಖಾಕಿ ಸಮವಸ್ತ್ರ ಧರಿಸಿ ಕರ್ತವ್ಯ ನಿರತರಾಗಿರುತ್ತಿದ್ದ ಪೊಲೀಸರು, ಭಾನುವಾರ ಕಡುನೀಲಿ ಟೀಶರ್ಟ್ ಪ್ಯಾಂಟ್ ಧರಿಸಿ ಕಬ್ಬನ್ ಪಾರ್ಕ್ನ ಹಸಿರಿನ ನಡುವೆ ವ್ಯಾಯಾಮನಿರತರಾಗಿದ್ದರು.
‘ಎಂ–ಸ್ಕ್ಯೂರ್ ನೆಟ್ವರ್ಕ್’ ಆಯೋಜಿಸಿದ್ದ ‘ಆರೋಹಣ’ ಶಿಬಿರದಲ್ಲಿ ರಾಜ್ಯ ಪೊಲೀಸ್ ಮಹಾ ನಿರ್ದೇಶಕ ಆರ್.ಕೆ. ದತ್ತಾ ಹಾಗೂ ಕೆ.ಎಸ್.ಆರ್.ಪಿ ಎಡಿಜಿಪಿ ಭಾಸ್ಕರ್ರಾವ್ ಯೋಗ, ವ್ಯಾಯಾಮದ ಮೂಲಕ ತಮ್ಮ ಫಿಟ್ನೆಸ್ ಗುಟ್ಟನ್ನು ಹಂಚಿಕೊಂಡರು. ಜುಂಬಾ ನೃತ್ಯ ಕಲಾವಿದೆ ಮನೀಷಾ ಭಟ್ ಕೂಡಾ ಹಾಜರಿದ್ದರು.