ಕಿರುತೆರೆ ಕಲಾವಿದರಾದ ಭವಾನಿ ಸಿಂಗ್ ಕಥೆಯ ನಾಯಕನಾಗಿ ಹಾಗೂ ‘ಡ್ರಾಮಾ ಜೂನಿಯರ್ಸ್’ ಖ್ಯಾತಿಯ ನಿಹಾಲ್, ಅಪೂರ್ವ ಸೇರಿದಂತೆ ಹಲವರು ವಿಭಿನ್ನ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ’ ಎಂದು ಜೀ ವಾಹಿನಿ ಬ್ಯುಸಿನೆಸ್ ಮುಖ್ಯಸ್ಥ ರಾಘವೇಂದ್ರ ಹುಣಸೂರು ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಮುಗ್ಧೆಯಾಗಿ ಮನೆ, ಗಂಡ, ಮಗು ಎಂದು ಸದಾ ಹಸನ್ಮುಖಿಯಾಗಿ ತನ್ನ ಸಂಸಾರವನ್ನು ಪ್ರೀತಿ ಅಲೆಯಲ್ಲಿ ತೇಲಿಸಲು ಪ್ರಯತ್ನಿಸುವ ‘ಸುಬ್ಬಲಕ್ಷ್ಮಿ ಸಂಸಾರದ’ ಕಥೆ ವೀಕ್ಷಕರ ಮನ ಗೆಲ್ಲುತ್ತದೆ ಎನ್ನುತ್ತಾರೆ ಅವರು.