ಬೆಂಗಳೂರು: ರಾಜ್ಯದಲ್ಲಿ ಬರ ಪರಿಹಾರಕ್ಕೆ ಕೇಂದ್ರ ಸರ್ಕಾರ ಮೂರು ವರ್ಷಗಳಲ್ಲಿ ₹ 4,500 ಕೋಟಿ ಬಿಡುಗಡೆ ಮಾಡಿದ್ದು, ಅದನ್ನು ರೈತರಿಗೆ ವಿತರಿಸಿಲ್ಲ ಎಂದು ಕೇಂದ್ರ ರಸಗೊಬ್ಬರ ಮತ್ತು ಸಂಸದೀಯ ವ್ಯವಹಾರಗಳ ಸಚಿವ ಅನಂತಕುಮಾರ ಆರೋಪಿಸಿದರು.
ನಗರದ ಆಡುಗೋಡಿ ಮುನಿಚಿನ್ನಪ್ಪ ಆಟದ ಮೈದಾನದಲ್ಲಿ ‘ಮೋದಿ ಫೆಸ್ಟ್ ಪ್ರದರ್ಶಿನಿ’ ಕಾರ್ಯಕ್ರಮ ಉದ್ಘಾಟಿಸಿದ ಅವರು, ಯುಪಿಎಯ 10 ವರ್ಷಗಳ ಅವಧಿಯಲ್ಲಿ ಬರ ಪರಿಹಾರಗಳಿಗೆ ಬಿಡುಗಡೆಯಾದ ಮೊತ್ತ ಕೇವಲ ₹ 4,500 ಕೋಟಿ ಎಂದು ಹೇಳಿದರು.
ಎನ್ಡಿಎ ಸರ್ಕಾರ ಕಳೆದ ಮೂರು ವರ್ಷಗಳಲ್ಲಿ ರಾಜ್ಯದಲ್ಲಿ ರಾಷ್ಟ್ರೀಯ ಹೆದ್ದಾರಿಗಳಿಗಾಗಿ ₹ 8,000 ಕೋಟಿ ಮತ್ತು ರೈಲ್ವೆ ಯೋಜನೆಗಳಿಗೆ ₹ 4,500 ಬಿಡುಗಡೆ ಮಾಡಿದೆ ಎಂದು ಅವರು ಸ್ಪಷ್ಟಪಡಿಸಿದರು.