‘ಯಾವುದೇ ಕಲಾ ಪ್ರಕಾರದ ಮೂಲ ಸತ್ವ ಅಧ್ಯಾತ್ಮ. ಜನರಂಜನೆ, ಮನರಂಜನೆ, ಆತ್ಮರಂಜನೆ ಮಾಡುವುದು ಕಲೆಯ ಉದ್ದೇಶವಾಗಿದೆ’ ಎಂದರು.
****
‘ಕಲಾವಿದರಿಗೆ ಮನ್ನಣೆ’
ಸಂವಾದವನ್ನು ನಡೆಸಿಕೊಟ್ಟ ವೀಣಾ ವಾದಕಿ ಸುಮಾ ಸುಧೀಂದ್ರ ಮಾತನಾಡಿ, ‘ಸಂಗೀತ ನಾಟಕ ಅಕಾಡೆಮಿಯು 1952ರಲ್ಲಿ ಸ್ಥಾಪನೆಯಾದರೂ 2000ರವರೆಗೆ ರಾಜ್ಯದ ಸಂಗೀತಗಾರರಿಗೆ ಪ್ರಶಸ್ತಿಗಳು ಬಂದಿದ್ದು ಕಡಿಮೆ. ಆದರೆ, ಇತ್ತೀಚಿನ ವರ್ಷಗಳಲ್ಲಿ ಹೆಚ್ಚಿನ ಪ್ರಶಸ್ತಿಗಳು ಸಿಗುತ್ತಿವೆ. ಇದಕ್ಕೆ ಕಾರಣ, ಅಕಾಡೆಮಿಯ ಕಾರ್ಯಕಾರಿ ಮಂಡಳಿಯಲ್ಲಿ ರಾಜ್ಯದ ಪ್ರತಿನಿಧಿಗಳು ಇದ್ದಾರೆ. ಅವರು ಪ್ರತಿಭೆಗಳನ್ನು ಗುರುತಿಸುತ್ತಿದ್ದಾರೆ’ ಎಂದರು.