ದಾವಣಗೆರೆ ಮೂಲದ ಈ ಚೆಲುವೆ, ಅಲ್ಲಿನ ಬಾಪೂಜಿ ತಾಂತ್ರಿಕ ಕಾಲೇಜಿನಲ್ಲಿ ಎಂಜಿನಿಯರಿಂಗ್ ಮುಗಿಸಿದ್ದು, ಎಂಬಿಎ ಪದವೀಧರೆಯೂ ಹೌದು. ‘ನಾಗಕನ್ನಿಕೆ’ಯ ಚಿತ್ರೀಕರಣ ವಿವಿಧ ಪ್ರದೇಶಗಳಲ್ಲಿ ನಡೆದಿದ್ದು ಅತ್ಯುನ್ನತ ತಂತ್ರಜ್ಞಾನವನ್ನು ಬಳಸಿಕೊಳ್ಳಲಾಗಿದೆ. ಪ್ರೀತಿ ಮತ್ತು ಸೇಡು ಧಾರಾವಾಹಿಯ ಕಥಾವಸ್ತು. ಅಂದ ಹಾಗೆ, ಜೂನ್ 26ರಿಂದ (ಸೋಮವಾರ) ರಾತ್ರಿ 7.30ಕ್ಕೆ ಈ ಧಾರಾವಾಹಿ ಪ್ರಸಾರವಾಗಲಿದೆ.