ಲಖನೌ: ಕರ್ನಾಟಕ ವೃಂದದ ಐಎಎಸ್ ಅಧಿಕಾರಿ ಅನುರಾಗ್ ತಿವಾರಿ ಅವರ ಸಾವಿನ ತನಿಖೆಯನ್ನು ತ್ವರಿತಗೊಳಿಸಲು ಒತ್ತಾಯಿಸುವುದಕ್ಕಾಗಿ ಅವರ ಕುಟುಂಬದ ಸದಸ್ಯರು ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್ ಅವರನ್ನು ಸದ್ಯವೇ ಭೇಟಿಯಾಗಲಿದ್ದಾರೆ.
ರಾಜನಾಥ್ ಅವರ ನಿಕಟವರ್ತಿಗಳನ್ನು ಅನುರಾಗ್ ಕುಟುಂಬದ ಸದಸ್ಯರು ಶೀಘ್ರ ಸಂಪರ್ಕಿಸಲಿದ್ದಾರೆ. ಅವರ ಮೂಲಕ ರಾಜನಾಥ್ ಅವರ ಭೇಟಿಗೆ ಸಮಯ ಪಡೆದುಕೊಳ್ಳಲಿದ್ದಾರೆ ಎಂದು ತಿಳಿದು ಬಂದಿದೆ. ರಾಜನಾಥ್ ಅವರು ಲಖನೌ ಸಂಸದ.