ಬೆಂಗಳೂರು: ಚಿಕ್ಕಲೂರು ಸಂಗಮ ಅರಣ್ಯ ಪ್ರದೇಶದಲ್ಲಿ ತಂತಿಯ ಉರುಳಿಗೆ ಸಿಲುಕಿದ್ದ ಎರಡು ಜಿಂಕೆಗಳನ್ನು ಯುವಕರ ತಂಡವೊಂದು ರಕ್ಷಿಸಿದ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಸಂದೀಪ್ ವೈವಿಎಸ್ ಎಂಬುವರ ಫೇಸ್ಬುಕ್ ಪೇಜ್ನಲ್ಲಿ ಈ ವಿಡಿಯೊ ಪ್ರಕಟಿಸಲಾಗಿದೆ. ಜಿಂಕೆಗಳನ್ನು ರಕ್ಷಿಸಿದ ಯುವಕರ ತಂಡಕ್ಕೆ ಸಾಕಷ್ಟು ಜನರು ಪ್ರಶಂಸೆ ವ್ಯಕ್ತಪಡಿಸಿದ್ದಾರೆ.
ಈ ಅರಣ್ಯ ಪ್ರದೆಶದಲ್ಲಿ ಜಿಂಕೆಗಳು ಹಾಗೂ ವನ್ಯಜೀವಿಗಳ ಬೇಟೆಗಾಗಿ ಕಿಡಿಗೇಡಿಗಳು ತಂತಿಯ ಉರುಳು ಹಾಕಿದ್ದಾರೆ. ಈ ಉರುಳಿಗೆ ಸಿಲುಕಿ ಎರಡು ಜಿಂಕೆಗಳು ನರಳಾಡುತ್ತಿರುವುದನ್ನು ಗಮನಿಸಿದ ಯುವಕರು ಆ ಜಿಂಕೆಗಳನ್ನು ರಕ್ಷಿಸಿದ್ದಾರೆ.
ವನಪಾಲಕರು ಮತ್ತು ಅರಣ್ಯ ಅಧಿಕಾರಿಗಳು ಏನು ಕೆಲಸ ಮಾಡುತ್ತಿದ್ದಾರೆ ಎಂದು ಹಲವರು ಈ ವಿಡಿಯೊ ಪೊಸ್ಟ್ಗೆ ಕಮೆಂಟ್ ಹಾಕಿದ್ದಾರೆ.