ವಿಜಯಪುರ: ಇಲ್ಲಿನ ಜಲನಗರ ಪೊಲೀಸ್ ಠಾಣೆಯ ವಾಹನ ನಿಲುಗಡೆ ಸ್ಥಳದಲ್ಲಿ ನಡೆದಿರುವ ಮದ್ಯದ ಪಾರ್ಟಿ ಬಹಳ ದಿನಗಳ ಹಿಂದೆ ಆಗಿರುವ ಘಟನೆ. ಅಶಿಸ್ತು ಸಹಿಸಲು ಸಾಧ್ಯವಿಲ್ಲ. ಪ್ರಕರಣದಲ್ಲಿ ಆರೋಪಿಯಾಗಿರುವ ಎಎಸ್ಐ ಎಸ್.ಎಸ್. ಮಾಳೇಂಗಾವ್, ಪೊಲೀಸ್ ಕಾನ್ಸ್ಟೆಬಲ್ ಐ.ವೈ. ಸೊಡ್ಡಿ ಅಮಾನತು ಮಾಡಲಾಗಿದೆ ಎಂದು ಎಸ್ಪಿ ಕುಲದೀಪ್ ಕುಮಾರ್ ಜೈನ್ ಹೇಳಿದ್ದಾರೆ.