ರೈತರ ಮೇಲೆ ಗೋಲಿಬಾರ್ ನಡೆದ, ಮಧ್ಯಪ್ರದೇಶದ ಮಂದಸೌರ್ಗೆ ರಾಹುಲ್ ಗಾಂಧಿ ಅವರು ಭೇಟಿ ನೀಡಿದ್ದನ್ನು ಹೊಗಳಿ ವಿನಯ್ ಪ್ರಧಾನ್ ಅವರು ವಾಟ್ಸ್ಆ್ಯಪ್ ಗ್ರೂಪ್ನಲ್ಲಿ ಸಂದೇಶ ಕಳುಹಿಸಿದ್ದರು. ಸಂದೇಶದಲ್ಲಿ ಅವರು, ‘ಪಪ್ಪು ಅವರು ಅದಾನಿ, ಅಂಬಾನಿ, ಮಲ್ಯ ಜತೆ ಕೈಜೋಡಿಸಬಹುದಾಗಿತ್ತು. ಆದರೆ ಹಾಗೆ ಮಾಡಲಿಲ್ಲ. ಪಪ್ಪು ಅವರು ಸಚಿವ, ಪ್ರಧಾನಿ ಆಗಬಹುದಾಗಿತ್ತು. ಇದಕ್ಕೆ ಹೊರತಾಗಿ, ಮಂದಸೌರ್ಗೆ ಭೇಟಿ ನೀಡುವ ಮೂಲಕ ಜೀವವನ್ನೇ ಪಣಕ್ಕಿಟ್ಟರು’ ಎಂದು ಉಲ್ಲೇಖಿಸಿದ್ದರು.