ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿದ್ಯುತ್ ಸ್ಪರ್ಶ: 2 ಕಾಡಾನೆ ಸಾವು

Last Updated 14 ಜೂನ್ 2017, 19:30 IST
ಅಕ್ಷರ ಗಾತ್ರ

ಸಿದ್ದಾಪುರ (ಮಡಿಕೇರಿ): ಸಮೀಪದ ಕಣ್ಣಂಗಾಲ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಒಂಟಿಯಂಗಡಿ ಬಳಿ ಬುಧವಾರ ವಿದ್ಯುತ್ ತಂತಿ ಸ್ಪರ್ಶದಿಂದ ಒಂದೇ ಸ್ಥಳದಲ್ಲಿ ಎರಡು ಕಾಡಾನೆಗಳು ಸಾವನ್ನಪ್ಪಿವೆ.

ಮಚ್ಚಾರಂಡ ಮಣಿ ಎಂಬುವರಿಗೆ ಸೇರಿದ ಕಾಫಿ ತೋಟದ ಬಳಿ ಕಾಡಾನೆಯೊಂದು ಮರದ ಕೊಂಬೆಯನ್ನು ಎಳೆದು ತಿನ್ನಲು ಯತ್ನಿಸಿದಾಗ ಅದು ತಂತಿ ಮೇಲೆ ಬಿದ್ದು ವಿದ್ಯುತ್ ಸ್ಪರ್ಶಿಸಿ 19 ಹಾಗೂ 26 ವರ್ಷದ ಎರಡು ಹೆಣ್ಣು ಆನೆಗಳು ಸಾವನ್ನಪ್ಪಿವೆ.

ಆನೆಗಳು ನಿರಂತರವಾಗಿ ಓಡಾಡುವ  ಪ್ರದೇಶಗಳನ್ನು ಇತ್ತೀಚೆಗೆ ಗುರುತಿಸಿರುವ ‘ಸೆಸ್ಕ್’, ವಿದ್ಯುತ್ ಕಂಬಗಳನ್ನು ಎತ್ತರಿಸುವ ಕಾಮಗಾರಿ ಕೈಗೊಂಡಿದೆ.

‘ಸಿದ್ದಾಪುರ ವ್ಯಾಪ್ತಿಯಲ್ಲಿ ಕಾಮಗಾರಿ ಪೂರ್ಣಗೊಂಡಿದ್ದು, ಪಾಲಿಬೆಟ್ಟ ಮತ್ತು ಕಣ್ಣಂಗಾಲ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಾಡಾನೆಗಳು ಸುಳಿದಾಡುವ ಪ್ರದೇಶಗಳ ಬಳಿ ಕಂಬಗಳನ್ನು ಎತ್ತರಿಸಲು ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಲಾಗಿದೆ. ಆದರೆ, ಸರ್ಕಾರದಿಂದ ಕಂಬಗಳು ಇದುವರೆಗೂ ಬಂದಿಲ್ಲ’ ಎಂದು ‘ಸೆಸ್ಕ್‌’ ಎಂಜಿನಿಯರ್ ನವೀನ್‌ಕುಮಾರ್ ಜೈನ್ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT