ಇದರಿಂದ ಪ್ರಸಕ್ತ ಹಣಕಾಸು ವರ್ಷದಲ್ಲಿ ಬೊಕ್ಕಸದ ಮೇಲೆ ₹ 20,339 ಕೋಟಿ ಹೊರೆ ಬೀಳಲಿದೆ ಎಂದು ಸಂಪುಟ ಸಭೆಯ ಬಳಿಕ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಸದ್ಯ ಬೆಳೆಸಾಲದ ಮೇಲೆ ಶೇ 9ರಷ್ಟು ಬಡ್ಡಿ ವಿಧಿಸಲಾಗುತ್ತಿದೆ. ಎಲ್ಲ ರೈತರಿಗೂ ಶೇ 2 ರಷ್ಟು ಸಬ್ಸಿಡಿ ಸಿಕ್ಕರೆ, ಶೇ 9ರ ಬದಲು ಶೇ7ರಷ್ಟು ಬಡ್ಡಿ ಪಾವತಿಸಬೇಕಾಗುತ್ತದೆ.
ಸಕಾಲದಲ್ಲಿ ಸಾಲ ಹಿಂದಿರುಗಿಸುವ ರೈತರಿಗೆ ಹೆಚ್ಚುವರಿಯಾಗಿ ಶೇ 3ರಷ್ಟು ಅಂದರೆ, ಶೇ 5ರಷ್ಟು ಸಬ್ಸಿಡಿ ದೊರೆಯಲಿದೆ. ಅಂತಹ ರೈತರು ಕೇವಲ ಶೇ4ರಷ್ಟು ಬಡ್ಡಿ ಪಾವತಿಸಿದರೆ ಸಾಕು.
ಪ್ರಕೃತಿ ವಿಕೋಪದಿಂದ ತೊಂದರೆಗೆ ಒಳಗಾದ ರೈತರ ಬೆಳೆಸಾಲ ಮರು ಹೊಂದಾಣಿಕೆ ಅಥವಾ ಮರು ಪಾವತಿ ವಿಸ್ತರಿಸಿದರೆ ಬ್ಯಾಂಕ್ಗಳಿಗೆ ಮೊದಲ ವರ್ಷ(2017–18ರಲ್ಲಿ) ಬಡ್ಡಿಯಲ್ಲಿ ಶೇ2ರಷ್ಟು ರಿಯಾಯತಿ ದೊರೆಯಲಿದೆ.