ಈ ನಿಟ್ಟಿನಲ್ಲಿ ಮೋಟಾರು ವಾಹನ ಕಾಯ್ದೆಯ ಸೆಕ್ಷನ್ 71 ಮತ್ತು 74 ರನ್ವಯ ಕೆಎಸ್ ಆರ್ ಟಿಸಿ ಮಾರ್ಗಗಳಲ್ಲಿ ಸಹಕಾರ ಸಾರಿಗೆ ಸಂಸ್ಥೆಯ ಬಸ್ ಸಂಚಾರಕ್ಕೆ ಪರವಾಗೆ ನೀಡಬೇಕು. ಪ್ರವಾಸೋದ್ಯಮದ ಕಂಟ್ರಾಕ್ಟ್ ಕ್ಯಾರೇಜ್ ಪರವಾನಗಿ ಮಂಜೂರಾತಿಯಲ್ಲಿ ನಮ ಗೂ ಪ್ರಾತಿನಿಧ್ಯ ನೀಡಬೇಕು. ಕೆಎಸ್ಆರ್ ಟಿಸಿ ಮಾದರಿಯಲ್ಲಿ ದೈನಂದಿನ ಕಲೆಕ್ಷನ್ ಆಧಾರದ ಮೇಲೆ ತೆರಿಗೆ ಪಾವತಿಸಲು ಅವಕಾಶ ಕಲ್ಪಿಸಬೇಕು.
‘ಸಂಸ್ಥೆಯು ಪ್ರತೀವರ್ಷ ವಿದ್ಯಾರ್ಥಿ ಗಳು, ವಯೋವೃದ್ದರು, ಅಂಗವಿಕಲರು, ಸ್ವಾತಂತ್ರ್ಯ ಯೋಧರು ಸೇರಿದಂತೆ ವಾರ್ಷಿಕ 20 ಸಾವಿರಕ್ಕೂ ಅಧಿಕ ಜನರಿಗೆ ಉಚಿತ ಹಾಗೂ ರಿಯಾಯಿತಿ ದರದ ಪಾಸ್ ನೀಡುತ್ತಿದೆ. ಕೆಎಸ್ಆರ್ ಟಿಸಿ ಮಾದರಿಯಲ್ಲಿ ರಿಯಾ ಯಿತಿಯ ಆರ್ಥಿಕ ನಷ್ಟ ತುಂಬಿಕೊಡಲು ಸಹಾಯಧನ ನೀಡಬೇಕು. ದೈನಂದಿನ ನಿರ್ವಹಣೆಗೆ ಅಪೆಕ್ಸ್ ಬ್ಯಾಂಕ್, ನಬಾರ್ಡ್ ಸಂಸ್ಥೆಗಳ ಮೂಲಕ ಕಡಿಮೆ ಬಡ್ಡಿ ದರದಲ್ಲಿ ಸಾಲದ ರೂಪದಲ್ಲಿ ಆರ್ಥಿಕ ನೆರವು ಪಡೆಯಲು ಅವಕಾಶ ಕಲ್ಪಿಸಬೇಕು ಎಂದು ವಿನಂತಿಸಿದರು.
ಸಹಕಾರ ಸಾರಿಗೆ ವ್ಯವಸ್ಥಾಪಕ ನಿರ್ದೇಶಕ ಗಾಡ್ವಿನ್ ಜಯಪ್ರಕಾಶ್, ನಿರ್ದೇಶಕರಾದ ಬಿ.ಎನ್. ಮಹೇಶ್, ಜಿ.ಆರ್. ವಿಶ್ವನಾಥ್, ಎಸ್.ಸಿ. ತಮ್ಮಪ್ಪ ಗೌಡ ಇದ್ದರು.