ಈ ಕುರಿತು ಮೂರೂ ರಾಜ್ಯಗಳು ಚಿಂತನೆ ಮಾಡಬೇಕು. ಬೇಡಿಕೆ ಈಡೇರುವವ ರೆಗೂ ನಮ್ಮ ಹೋರಾಟ ನಿರಂತರವಾಗಿ ರುತ್ತದೆ ಎಂದು ಸ್ಪಷ್ಟಪಡಿಸಿದರು.
ಮಹಾದಾಯಿ ಹೋರಾಟ ಸಮಿತಿ ಕೋಶಾಧ್ಯಕ್ಷ ಎಸ್.ಬಿ.ಜೋಗಣ್ಣವರ ಮಾತನಾಡಿ ಮಹಾದಾಯಿ ಹೋರಾಟ ಕೇವಲ ರೈತರ ಹೋರಾಟವಲ್ಲ, ಸಮಗ್ರ ಉತ್ತರ ಕರ್ನಾಟಕದ ರೈತರ ಬದುಕಿನ ಹೋರಾಟವಾಗಿದೆ. ಈ ಭಾಗದ ಶಾಸಕರು, ಸಂಸದರು ಮಹಾದಾಯಿ ಕುರಿತು ಪ್ರಧಾನಿ ಬಳಿ ನಿಯೋಗ ಕೊಂಡೊಯ್ದು ಶಾಶ್ವತವಾದ ಪರಿಹಾರ ಕಂಡುಕೊಳ್ಳಬೇಕು ಎಂದರು.
ಚಂದ್ರಗೌಡ ಪಾಟೀಲ, ಪರಶುರಾಮ ಜಂಬಗಿ, ವೆಂಕಪ್ಪ ಹುಜರತ್ತಿ, ಜಗನ್ನಾಥ ಮುಧೋಳ, ಹನಮಂತ ಪಡೆಸೂರ, ಬಸಮ್ಮ ಐನಾಪುರ ರತ್ನವ್ವ ಸವಳಭಾವಿ, ಅನಸವ್ವ ಶಿಂಧೆ, ರಾಯವ್ವ ಕಟಗಿ, ಚನ್ನಬಸವ್ವ ಆಯಟ್ಟಿ ಇದ್ದರು.