ಶಂಕರಮೂರ್ತಿ ಅವರನ್ನು ಬೆಂಬಲಿಸುವ ಸಂಬಂಧ ಮಂಗಳವಾರ ಜೆಡಿಎಸ್ ಗೊಂದಲದಲ್ಲಿತ್ತು. ಆದರೆ, ಜೆಡಿಎಸ್ ರಾಜ್ಯ ಅಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ, ‘ಶಂಕರಮೂರ್ತಿ ಅವರನ್ನು ಬೆಂಬಲಿಸಲು ನಮ್ಮ ಪಕ್ಷ ತೀರ್ಮಾನಿಸಿದೆ’ ಎಂದು ಬುಧವಾರ ತಿಳಿಸಿದ್ದರು. ಅದರಂತೆ, ಗುರುವಾರ ಜೆಡಿಎಸ್ನ ವಿಧಾನಪರಿಷತ್ ಸದಸ್ಯರು ಶಂಕರಮೂರ್ತಿ ಅವರ ಪರ ಮತ ನೀಡಿ ಬೆಂಬಲಿಸಿದ್ದರು.