ಈ ಕುರಿತು ಬೃಹನ್ಮುಂಬೈ ನಗರಪಾಲಿಕೆಯ ದಕ್ಷಿಣ ಮುಂಬೈ ವಿಭಾಗದ ಶೈಕ್ಷಣಿಕ ಪರೀಕ್ಷಾಧಿಕಾರಿ ಬಿ.ಬಿ. ಚವಾಣ್ ಅವರು ಪ್ರಕಟಣೆ ಹೊರಡಿಸಿದ್ದಾರೆ. ‘2009ರ ಶಿಕ್ಷಣದ ಹಕ್ಕು ಕಾಯ್ದೆಯ ನಿಯಮಗಳ ಪ್ರಕಾರ, ಯಾವುದೇ ಶಾಲೆಯು ಸ್ಥಳಿಯಾಡಳಿತದಿಂದ ನಿರಾಕ್ಷೇಪಣಾ ಪತ್ರ (ಎನ್ಒಸಿ) ಪಡೆಯದೆ ಕಾರ್ಯಾಚರಿಸುವಂತಿಲ್ಲ. ಪೋಷಕರು ತಮ್ಮ ಮಕ್ಕಳನ್ನು ಐಐಸ್ಗೆ ಸೇರಿಸಬಾರದು’ ಎಂದು ಪ್ರಕಟಣೆಯಲ್ಲಿ ಉಲ್ಲೇಖಿಸಲಾಗಿದೆ.