ಮದ್ರಾಸ್ ಹೈಕೋರ್ಟ್ ಈಗಾಗಲೇ ಅಧಿಸೂಚನೆಗೆ ಮಧ್ಯಂತರ ತಡೆಯಾಜ್ಞೆ ನೀಡಿರುವ ವಿಚಾರವನ್ನು ಅವರು ನ್ಯಾಯಪೀಠದ ಗಮನಕ್ಕೆ ತಂದರು.
ಸಂವಿಧಾನ ನಾಗರಿಕರಿಗೆ ನೀಡಿರುವ ಧಾರ್ಮಿಕ ಹಕ್ಕು, ಆಹಾರದ ಖಾಸಗಿತನ ಮತ್ತು ವೈಯಕ್ತಿಕ ಸ್ವಾತಂತ್ರ್ಯಗಳಿಗೆ ಕೇಂದ್ರದ ಅಧಿಸೂಚನೆಯಿಂದ ಅಡ್ಡಿಯಾಗಿದೆ ಎಂದು ಅರ್ಜಿದಾರರಲ್ಲಿ ಒಬ್ಬರಾದ ಹೈದರಾಬಾದ್ನ ಮೊಹಮದ್ ಅಬ್ದುಲ್ ಫಾಹೀಮ್ ವಾದವಾಗಿದೆ.