ವಿಚಾರಣೆ ವೇಳೆ ಕುಮಾರಸ್ವಾಮಿ ಅವರ ವಕೀಲ ಹಸ್ಮತ್ ಪಾಷಾ, ‘ಈಗಾಗಲೇ ಇಂತಹದೇ ಸ್ವರೂಪದ ಆರೋಪ ಇರುವ ಇನ್ನೆರಡು ಪ್ರಕರಣಗಳಲ್ಲಿ ಅರ್ಜಿದಾರರಿಗೆ ಅಧೀನ ನ್ಯಾಯಾಲಯ ಜಾಮೀನು ನೀಡಿದೆ. ಆದರೆ, ಎಸ್ಐಟಿ ದಾಖಲಿಸಿರುವ ಈ ಪ್ರಕರಣದಲ್ಲಿ ಮಾತ್ರ ಜಾಮೀನು ನಿರಾಕರಿಸಲಾಗಿದೆ. ಇದು ಕಾನೂನಿನ ದುರುಪಯೋಗ’ ಎಂದು ಆಕ್ಷೇಪಿಸಿದರು.