ವಿಧಾನಸಭೆಯಲ್ಲಿ ನಡೆದ ಚರ್ಚೆಯಲ್ಲಿ ಪಾಲ್ಗೊಂಡ ಅವರು, ‘ಮುಖ್ಯಮಂತ್ರಿಯಾದ ಆರೇ ತಿಂಗಳಿನಲ್ಲಿ ನನ್ನ ವಿರುದ್ಧ ₹150 ಕೋಟಿ ಲಂಚ ಪಡೆದ ಆರೋಪವನ್ನು ಸದಸ್ಯರೊಬ್ಬರು ಸದನದಲ್ಲಿ ಮಾಡಿದರು. ಅದನ್ನು ಮುಂದಿಟ್ಟುಕೊಂಡು ಅಂದು ವಿರೋಧ ಪಕ್ಷದಲ್ಲಿದ್ದವರು(ಕಾಂಗ್ರೆಸ್) ರಾಷ್ಟ್ರಪತಿ, ಪ್ರಧಾನಮಂತ್ರಿ ಹಾಗೂ ಕಾಂಗ್ರೆಸ್ ಅಧ್ಯಕ್ಷೆಯನ್ನು ಭೇಟಿಯಾಗಿ ಸಿಬಿಐ ತನಿಖೆ ನಡೆಸುವಂತೆ ಆಗ್ರಹಿಸಿದರು. ಆದರೆ ಯಾರೊಬ್ಬರೂ ದಾಖಲೆಯನ್ನು ನೀಡಲಿಲ್ಲ’ ಎಂದು ಹೇಳಿದರು.